Monday, April 29, 2013

ಪ್ರಕೃತಿ

ಭೂಮಿಯಲೆಲ್ಲ ನರ್ತಿಸುತ್ತಿತ್ತು ಬರಗಾಲದ ಕರಿ ನೆರಳೇ
ರಮಿಸಲೆಂದು ರಭಸದಿ ಬಂತು ಧಾರಾಕಾರವಾಗಿ ಮಳೆ
ನಾಚಿ ಮೌನದಿ ಸಮ್ಮತಿಸಿತು ನವ ವಧುವಿನಂತೆ ಇಳೆ
ನವಮಾಸಗಳಾಗಿರಲು ಎಲ್ಲೆಲ್ಲೂ ಹಚ್ಚ ಹಸಿರ ಹೊಂಬಾಳೆ
ಎಲ್ಲರಲ್ಲೂ ಬರಗಾಲ ಮುಗಿಯಿತೆಂಬ ಸಂತೋಷದ ಕಳೆ
ತಿಳಿದುಕೊ ಮಾನವ ನಿನ್ನನ್ನುಳಿಸಿರುವುದು ಮರ-ಗಿಡಗಳೇ                                                                  
                                                                 

No comments:

Post a Comment