Tuesday, June 25, 2013

ಕೀರ್ತಿ

ಕೊಡಚಾದ್ರಿ ನೀನೆಷ್ಟು ರಮಣೀಯ
ನೀ ನಿಸರ್ಗದ ಅದ್ಭುತ ವಿಸ್ಮಯ

ಗಿರಿರಾಜ ಆಯೋಜಿಸಿದ ಸ್ವಯಂವರ

ತುಂಬಿ ತುಳುಕುತಿತ್ತು ಅಂತ್ಹಪುರ
ಎಲ್ಲರ ಮನದಲು ಒಂದೆ ಕಾತುರ
ಯಾರಾ ನಿನ್ನ ಪಡೆವ ಸರದಾರ

ವರುಣನ ಮಳೆಯ ನರ್ತನ

ಅರುಣನ ಹೊಳೆಯುವ ಕಿರಣ
ಚಂದ್ರನ ನಗುವಿನ ಹೂರಣ
ಸೆಳೆಯಲಿಲ್ಲ ನಿನ್ನ  ಗಮನ 

ಕಾಮನ ಬಿಲ್ಲಿನ ಚಮತ್ಕಾರ

ಮೇಘಧೂತನ ಬೆಳ್ಳಿ ಗೋಪುರ
ಗಾಳಿಯ ಸಂಗೀತದ ಹಂದರ
ಮೂಡಿಸಿದವು ನಿನ್ನಲಿ ಬೇಸರ

ಬಂತು ಅನಿಸಿಕೆ ತಿಳಿಸುವ ಸರದಿ
ಕುತೂಹಲದಿ ಕೇಳುತಿರಲು ಮಂದಿ
ನೀ ನುಡಿದೆ ನಾಚುತ ಮನದಿ
ಆಗಬೇಕೆಂದು ವನರಾಜನ ಮಡದಿ

ನೀ ಹೇಳಿದ್ದೊಂದೆ, ಆತನ ಹಸಿರ ಸಿರಿ
ಹೆಚ್ಚಿಸುರುವುದು ನಿನ್ನ ಕೀರ್ತಿಯ ಗರಿ